ನಾವು ಯಾವುದೇ ಒಂದು ತರಗತಿಯಿಂದ/ವರ್ಗದಿಂದ (class) ಇನ್ನೊಂದು ತರಗತಿಗೆ/ವರ್ಗಕ್ಕೆ ಹೋಗಬೇಕಿದ್ರೆ ಒಂದು ಪರೀಕ್ಷೆಯನ್ನ ತೆಗೆದುಕೊಳ್ಳಬೇಕಾಗುತ್ತೆ. ಪರೀಕ್ಷೆಯಲ್ಲಿ ಉತ್ತೀರ್ಣ ಆಗುವುದು ಒಂದು ಸಾಧ್ಯತೆಯಷ್ಟೆ! ಆ ತರಗತಿಯಲ್ಲಿ ಇರೋವರ್ಗೂ ಅನೇಕ ಸಣ್ಣ ಪುಟ್ಟ ಪರೀಕ್ಷೆಗಳು ಇರೋದು ಸಹಜ. ಹಾಗೆಯೇ ಅನೇಕ assignments ಕೂಡ ಇರುತ್ತೆ! ಆದರೆ ಕೊನೆಯ ಪರೀಕ್ಷೆ (final exam) ಎಲ್ಲಾವುದಕ್ಕೂ ಮುಖ್ಯ. ಯಾವುದೇ ಶಾಲೆ ಅಥವ ತರಗತಿಯನ್ನ ತೊಗೊಂಡ್ರೂ, ಅದ್ರಲ್ಲಿ ಕೆಲವೇ ಕೆಲವರು ಮಾತ್ರಾ ಚೆನ್ನಾಗಿ ತಯಾರಿ ಮಾಡ್ಕೊತಾರೆ, ಚೆನ್ನಗಿ ಓದ್ತಾರೆ, ಚೆನ್ನಾಗಿ ಎಲ್ಲವನ್ನೂ ಅರ್ಥ ಮಾಡ್ಕೋತಾರೆ, ಮಿಕ್ಕವರೆಲ್ಲ ಸುಮ್ಮನೆ ಇರ್ತಾರೆ ಹೋಗ್ತಾರೆ. ಆರ್ದ್ರಿಂದ ತುಂಬಾ ಕೆಲವರು ಮಾತ್ರಾ with distinction ಆಚೆ ಬರ್ತಾರೆ, ಕೆಲವರು first classನಿಂದ ಆಚೆ ಬರ್ತಾರೆ, ಕೆಲವರು second, third class. ಇವ್ರೆಲ್ಲಾರೂ ಮುಂದಕ್ಕೆ ಹೋಗ್ತಾರೆ, ಆದರೆ ತೂಕ್ ಹೊಡ್ದವ್ರು ಮಾತ್ರಾ ಅಲ್ಲೇ ಉಳ್ಕೊತಾರೆ ಇಲ್ಲಾ ಕೆಳ್ಗೆ ಹೋಗ್ತಾರೆ.
ಇದು ಸುಲಬದ ವಿಷ್ಯ, ಇದನ್ನೇಕೆ ಬರೀತಾ ಇದೀನಿ? ಒಳ್ಳೆಯ ಪ್ರಶ್ನೆ.
ಶಾಲೆ ಹೇಗೋ, ಸಂಸಾರ ಹಾಗೆ ಅನ್ಸುತ್ತೆ ಅಲ್ವಾ? ಜೀವ ಇರುವ ತನಕ (ತರಗತಿಯಲ್ಲಿ ಬರ್ತಿ ಆದ ಹಾಗೆ) ಸಣ್ಣ ಪುಟ್ಟ testಗಳು ಇದ್ದಿದ್ದೆ. ಸಂಸಾರ, ಕೆಲ್ಸ, ಮಕ್ಕಳು, ಮನೆ, ಮಠ ಹೀಗೆ ಒಂದಾದಮೇಲೊಂದು ಟೆಸ್ಟ್ ಇದ್ದಿದ್ದೆ. ಇವುಗಳಲ್ಲಿ ಉತ್ತೀರ್ಣರಾಗೋದು ಮುಖ್ಯ, ಆದ್ರಿಂದ ಬೆವರು ಸುರಿಸಿ, ಕಷ್ಟ ಪಟ್ಟು, ಹರ್ಕೊಂಡು ಓದ್ತೀವಿ. ಕೆಲವರು ಸುತರಾಮ್ ಓದಲ್ಲ, ಅವರದೇ ಬೇರೆ ಶಾಲೆ, ತರಗತಿ. ಎಲ್ಲಾ ಸರಿ, ಆದ್ರೆ ಈ ವರ್ಗಗಳು ಯಾವುವು? ಪ್ರಾಣಿ, ಪಕ್ಷಿ, ಕೀಟ, ಶೂದ್ರ, ಬ್ರಾಹ್ಮಣ, ಕ್ಷತ್ರಿಯ, ವೈಷ್ಯ ಹೀಗೆ ಬೇರೆ ಬೇರೆ ಕ್ಲಾಸ್ ಅಲ್ವೆ? ಶಾಲೆಗೂ ಜೀವನಕ್ಕೂ ಒಂದೇ ವ್ಯತ್ಯಾಸ ಅಂದ್ರೆ ಇದ್ರಲ್ಲಿ demotion ಆಗೋ ಸಂಭವ ಜಾಸ್ತಿ ಅಷ್ಟೆ. ಮೇಲಕ್ಕೆ ಬೇಕಾದ್ರೂ ಹೋಗಬಹುದು ಕೆಳಕ್ಕೆ ಬೇಕಾದ್ರೂ ಹೋಗಬಹುದು, ಕೀಟವಾದ್ರೂ ಆಗ ಬಹುದು, ಮನುಷ್ಯನಾದೂ ಆಗ ಬಹುದು.
ಆದರೆ ಕೊನೆಯ ಪರೀಕ್ಷೆ ಯಾವುದು ಗುರು? ಗೆದ್ದವರು ಹೋಗುವುದೆಲ್ಲಿಗೆ? ಕೊನೆಯ ಪರೀಕ್ಷೆ ಸಾವಲ್ಲವೆ (death)? ಸಾವಿನ ನಂತ್ರ promote ಆದ್ರೂ ಆಗಬಹುದು demote ಆದ್ರೂ ಆಗಬಹುದು. ನಮ್ಮ ಪೂರ್ವಜರು ಜೀವನದ ಮುಂದಿನ ತರಗತಿಯನ್ನ ಸ್ವರ್ಗ, ನರಕ, ಭೂಲೋಕ, ಪಾತಾಳಲೋಕ ಅಂತ ಬೇರೆ ಬೇರೆ ಲೆವೆಲ್ಸ್ ಮಾಡಿ, ಜೊತೆಗೆ ಪ್ರಾಣಿ, ಪಕ್ಷಿ, ಮನುಷ್ಯ ಅಂತ ಕ್ಲಾಸಸ್ ಮಾಡಿ ಯಾರು ಎಲ್ಲಿಗೆ ಬೇಕಾದ್ರೂ ಹೋಗಬಹುದು. ಶಾಲೆಯಲ್ಲಿ ಕೆಲವೇ ಕೆಲವರು ಮಾತ್ರಾ ಹೇಗೆ ಚೆನ್ನಾಗಿ ತಯಾರಿ ಮಾಡ್ಕೊತಾರೋ, ಜೀವನದಲ್ಲೂ ಕೂಡ. "ಮನುಷ್ಯಾಣಾಂ ಸಹಸ್ರೇಶು ಕಷ್ಚಿತ್ ಯತತಿ ಸಿದ್ಧಯೆ" [ಸಾವಿರಾರು ಮನುಷ್ಯರಲ್ಲಿ ಕೆಲವರು ಮಾತ್ರಾ ಪ್ರಯತ್ನ ಪಡುತ್ತಾರೆ], ಆದ್ರೆ ತಯಾರಾದವ್ರೆಲ್ಲಾ distinctionಇಂದ ಉತ್ತೀರ್ಣರಾಗಲ್ಲಾ ಅಲ್ವಾ? ಆದ್ರಿಂದ ಭಗವಂತ ಹೇಳೋ ಹಾಗೆ "ಯತತಾಂ ಅಪಿ ಸಿದ್ಧಾನಾಂ ಕಶ್ಚಿನ್ ಮಾಂ ವೇತ್ತಿ ತತ್ವತಃ" (ಈ ಸಿದ್ದಿಸುವವರ ಗುಂಪಲ್ಲಿ, ಕೆಲವರು ಮಾತ್ರಾ ಸರ್ಯಾಗಿ ಅರ್ಥ ಮಾಡ್ಕೊತಾರೆ). ಕೆಲವರು ಮಾತ್ರ ಮೋಕ್ಷವನ್ನ ಪಡೀತಾರೆ, ಕೆಲವರು (first classers) ಸ್ವರ್ಗ ಲೋಕಕ್ಕೆ ಆಗ್ಲೀ, ಡುಮ್ಕಿ ಹೊಡ್ದವ್ರು ನರ್ಕಕ್ಕಾಗ್ಲೀ, ಮನುಷ್ಯ ಪ್ರಾಣಿ ಆಗೋದು, ಪ್ರಾಣಿ ಮನುಷ್ಯನಾಗೋದು ಇದ್ದಿದ್ದೆ. ಮೇಲೆ ಕೆಳಗೆ, ಆ ಕಡೆ ಈ ಕಡೆ ಅಲೆದಲೆದು, ಕೊನೆಗೆ ಬುದ್ದಿ ಬರುತ್ತೇನೋ (ಬಹುನಾಂ ಜನ್ಮನಾಂ ಅಂತೆ ಜ್ಞಾನವಾನ್ ಮಾಂ ಪ್ರಪದ್ಯತೆ). ಆದರೆ ಮತ್ತೆ ಮತ್ತೆ ಈ ಶಾಲೆಗೆ ಯಾವುದೋ ಒಂದು ರೂಪದಲ್ಲಿ, ಯಾವುದೋ ಒಂದು ವರ್ಗದಲ್ಲಿ ಬರಬೇಕಾಗುತ್ತೆ (ಆಬ್ರಹ್ಮ ಭುವನಾಲ್ಲೋಕ ಪುನರಾವರ್ತಿನೋರ್ಜುನ). [ಈಗಿನ ಶಾಲೆಗಳು ಬಿಡಿ ಎಲ್ಲಾರೂ distinction, ಅದರ ಅರ್ಥವೇ ಇಲ್ಲದ ಹಾಗ ಆಗಿದೆ. ಆದರೆ ಕಲಿಯುಗ ಹಾಗೆ ತಾನೆ? ಬೇರೆಲ್ಲಾ ಯುಗಕ್ಕಿಂತ ಈ ಯುಗದಲ್ಲಿ ಮೋಕ್ಷ ಅತಿ ಸುಲಭ]
ಆದ್ರೆ ಜೀವನದಲ್ಲಿ ಮಾತ್ರ ಒಂದು ultimate exam ಅಂತ ಇರುತ್ತಂತೆ, ಆ ಪರೀಕ್ಷೆಯನ್ನ ಮುಗಿಸೋರು ಮತ್ತೊಮ್ಮೆ ಎಂದೂ ಪರೀಕ್ಷೆ ತೊಗೊಬೇಕಿಲ್ಲವಂತೆ. ಆ ultimate examಗೆ ತಯಾರಾಗೋರೆ ಜಾಣರು, ಅಲ್ಲವೇ? ಮಿಕ್ಕವರೆಲ್ಲಾ ಮೂಢರು, ನಾವು ನೀವೆಲ್ಲರೂ ಇದ್ದ ಹಾಗೆ, ಅಲ್ಲವೆ? ಈ ಪರೀಕ್ಷೆಗೆ ಅರ್ಹತೆ ಏನು? ಮಾನವ ಜನ್ಮವಂತೆ, ಆದಕ್ಕೆ ನಮ್ಮ ದಾಸರು ಹೇಳೋದು "ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ".
Subscribe to:
Post Comments (Atom)

1 comment:
ಭಾವಾ,
ದೊಡ್ಡ ವಿಷಯಗಳನ್ನು ಚಿಕ್ಕ ಉದಾಹರಣೆಯೊಂದಿಗೆ ವಿವರಿಸಿದ್ದೀರ.
ಪರೀಕ್ಷೆ ಆದ ಮೇಲೆ ಏನು?
Post a Comment